+91 9483 81 2877
Support Center

Consequatur consequuntur doloremque facere voluptatem explicabo et molestiae. Qui esse consequuntur magni.

“ಮೂಕಜ್ಜಿಯ ಕನಸುಗಳು” ಎಂಬ ಕಾದಂಬರಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತ್ ಅವರು ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಮೂಕಜ್ಜಿ ಎಂಬ ವೃದ್ಧ ಮಹಿಳೆ ತನ್ನ ಅದ್ಭುತ ಸ್ವಪ್ನಶಕ್ತಿಯ ಮೂಲಕ ಜಗತ್ತಿನ ಹಲವಾರು ಚಿಂತನೆಗಳು, ಧರ್ಮ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಹುಡುಕುತ್ತಿರುವ ಕಥಾವಸ್ತು ಇದೆ. ಆಕೆಯ ಮೊಮ್ಮಗ ಸುಬ್ಬರಾಯನೊಂದಿಗೆ ನಡೆಸುವ ಸಂಭಾಷಣೆಯ ಮೂಲಕ, ಕೃತಿಯು ದ್ವಂದ್ವ ಭಾವನೆಗಳು ಮತ್ತು ಮಾನವ ಚಿಂತನೆಯ ಪ್ರಗತಿಯನ್ನು ತೆರೆಮೆಯ ಮೇಲೆ ತರುತ್ತದೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯನ್ನು ಒಂದು ಮಹತ್ವದ ಕಾದಂಬರಿಯಾಗಿ ಪರಿಗಣಿಸಲಾಗುತ್ತದೆ.

ನೀಲು ಪದ್ಯಗಳು ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ಅಸ್ಮಿತೆಯನ್ನು ಉಳಿಸಿಕೊಂಡಿವೆ. ಹೊಸ ಪ್ರಕಾರವಾಗಿಯೇ ಹೊರಹೊಮ್ಮಿವೆ ಇಂತಹ ಕವಿತೆಗಳ ಮೊದಲ ಸಂಗ್ರಹ ಈ ಕೃತಿ.

‘ಸಂಸ್ಕಾರ’ದ ಒಟ್ಟಂದದ ಸಿದ್ಧಿಯನ್ನು ನೋಡಿದಾಗ, ಭಾರತೀಯ ಸಾಹಿತ್ಯರಂಗದಲ್ಲಿ ಕನ್ನಡದ ಪ್ರತಿನಿಧಿಯಾಗಿ ಬೆಳಗಬಲ್ಲ ಕೆಲವೇ ಕೃತಿಗಳಲ್ಲಿ ‘ಸಂಸ್ಕಾರ’ ಒಂದಾಗಿದೆ ಎಂದು ಖಚಿತವಾಗಿ ಹೇಳಬಹುದು.

“ನೆನಪಿನ ದೋಣಿಯಲ್ಲಿ” ಕುವೆಂಪು ಅವರ ಅತೀ ಮಧುರವಾದ ಆತ್ಮಕಥನಾತ್ಮಕ ಕೃತಿ. ತಮ್ಮ ಬಾಲ್ಯ, ಯೌವನ, ಬದುಕಿನ ಅನುಭವಗಳು ಮತ್ತು ಹಳ್ಳಿಗಾಡಿನ ನೆನಪುಗಳನ್ನು ಕಾವ್ಯಮಯವಾಗಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ನೆನಪುಗಳ ದೋಣಿಯಲ್ಲಿ ಸಾಗುವಂತೆ ಓದುಗರನ್ನು ತಮ್ಮ ಜೀವನಯಾನದಲ್ಲಿ ಸೇರಿಸಿಕೊಳ್ಳುವ ಕುವೆಂಪು, ಪ್ರಕೃತಿ, ಸಂಸ್ಕೃತಿ, ಮನುಷ್ಯ ಸಂಬಂಧಗಳು ಮತ್ತು ಮೌಲ್ಯಗಳ ಸುಂದರ ಚಿತ್ರಣವನ್ನು ನೀಡಿದ್ದಾರೆ. ಸರಳ ಶೈಲಿಯಲ್ಲೇ ಗಾಢವಾದ ಭಾವನೆಗಳನ್ನು ತಲುಪಿಸುವ ಈ ಕೃತಿ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಒಂದು ಶಾಶ್ವತ ಸಂಪತ್ತು.

“ಕೃಷಿ ಯಾಕೆ ಖುಷಿ” ಒಂದು ಪ್ರೇರಣಾದಾಯಕ ಹಾಗೂ ಚಿಂತನಾತ್ಮಕ ಕೃತಿ. ರೈತನ ಜೀವನ, ಕೃಷಿಯ ಮಹತ್ವ ಮತ್ತು ಭೂಮಿಯೊಡನೆ ಇರುವ ಮಾನವನ ಆತ್ಮೀಯ ಸಂಬಂಧವನ್ನು ಈ ಕೃತಿ ಮನೋಜ್ಞವಾಗಿ ವಿವರಿಸುತ್ತದೆ. ಕೃಷಿ ಕೇವಲ ಜೀವನೋಪಾಯವಲ್ಲ, ಅದು ಸಂತೋಷ, ಸಮಾಧಾನ ಮತ್ತು ಸೃಜನಶೀಲತೆಯ ಮೂಲವೆಂಬ ಸಂದೇಶವನ್ನು ನೀಡುತ್ತದೆ. ಸರಳ ಭಾಷೆಯಲ್ಲಿ ಬರೆಯಲ್ಪಟ್ಟ ಈ ಕೃತಿ ಓದುಗರಲ್ಲಿ ಕೃಷಿ ಜೀವನದ ಮೆಲುಕು ಮೂಡಿಸುತ್ತದೆ.


ಕವಿಗಳೆಂದು ಜನಪ್ರಿಯರಾಗಿರುವ ಕುವೆಂಪು ಅವರು ಎರಡು ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ. ಅದರ ನಂತರ ಪ್ರಕಟವಾದ ಕಾದಂಬರಿಯೇ ಮಲೆಗಳಲ್ಲಿ ಮದುಮಗಳು.



Sed voluptatem neque mollitia possimus. Ut quia consequatur ut quia fuga eos et. Vel quo deserunt porro maiores voluptas error. Expedita quo cupiditate doloremque illo commodi atque placeat.

ಕಡಲ ಅಬ್ಬರ.. ತೆಂಕುಗಾಳಿ.. ವಿಶಾಲ ಬಯಲಲ್ಲಿ ಮೈಚಾಚಿದ ಹಸಿರ ಹೊಲಗಳು.. ಅರಾಲು.. ಜಡಿಮಳೆ.. ಬೀಸುಗಾಳಿ.. ಕಡಲದಂಡೆ.. ಅಳುವೆ.. ಕೆರೆ.. ತೋಟ.. ಗದ್ದೆ.. ಅಗೇಡಿ.. ಹನೆಮರ.. ಇವೆಲ್ಲವೂ ಕಾರಂತರ ಮಾತಿನಲ್ಲಿ ಸುರುಳಿ ಬಿಚ್ಚಿ ಕಣ್ಮುಂದೆ ಹರಡಿ ಬಿಡುತ್ತವೆ.