Description
ಒಂದು ಕಾದಂಬರಿ ಮನಸಲ್ಲಿ ಉಳಿದು ಬಿಡಲು ಎರಡು ಕಾರಣಗಳು. ಒಂದು ಕಥೆಯ ಹಂದರ ಎರಡು ಮನದಲ್ಲೇ ಉಳಿಯುವಂತಹ ಪಾತ್ರಗಳ ಗಡಸುತನ… ಪುಸ್ತಕ ಹೇಗಿರಬೇಕು ಎಂದು ಯಾರಾದರೂ ನನ್ನ ಕೇಳಿದರೆ ತಟಕ್ಕನೆ ನನ್ನಿಂದ ಬರುವ ಉತ್ತರ… ಓದಿಯಾದ ಮೇಲೆ ಕನಿಷ್ಟ ಕೆಲವು ದಿನಗಳವರೆಗೂ ನನ್ನ ಕಾಡುವಂತಿರಬೇಕು… ನನ್ನ ಮನಸ್ಸನ್ನು ಗೀರುವಂತಿರಬೇಕು… ಪಾತ್ರಗಳೊಂದಿಗೆ ನಾನೇ ಮಾತಿಗಿಳಿಯುವಂತಿರಬೇಕು. ಇಂತಹ ಅನುಭವ ಮೊದಲೂ ಬೇಕಾದಷ್ಟು ಬಾರಿ ಆಗಿದೆ. ಪುನಃ ಆದದ್ದು ಇತ್ತೀಚೆಗೆ ಓದಿದ “ಮರಳಿ ಮಣ್ಣಿಗೆ” ಕಾದಂಬರಿಯಿಂದ.
ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತವನ್ನಾಗಿಸಿದ ಕಾರಂತರು ಬರವಣಿಗೆ.. ಯಕ್ಷಗಾನ.. ರಾಜಕೀಯ ಚಿಂತನೆ.. ಹಾಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ ಬರವಣಿಗೆಯಲ್ಲಿ ಪರಿಸರ ಪ್ರೇಮದ ಜೊತೆಗೆ ಸಾಮಾಜಿಕ ಕಳಕಳಿ ಸಂದೇಶ ವ್ಯಕ್ತಪಡಿಸಿದ “ಮರಳಿ ಮಣ್ಣಿಗೆ” ಕಾದಂಬರಿ ಮಹತ್ತರವಾದುದು. ಬರೋಬ್ಬರಿ 415 ಪುಟಗಳ ವಿಸ್ತಾರ ಕಾದಂಬರಿ ಕರಾವಳಿ ಪ್ರದೇಶಗಳ ಕೋಡಿ, ಪಡುಮುನ್ನೂರು, ಮಂದರ್ತಿ, ಮಣೂರುಗಳ ಪ್ರಾದೇಶಿಕ ಭಾಷೆಯಲ್ಲಿ ಎಳೆಎಳೆಯಾಗಿ ಬಿಡಿಸಿ ಹರವಿದ ಕಥೆ.
Reviews
There are no reviews yet.